ಶನಿವಾರ, ಮೇ 21, 2022

ಸುದೀಪ್ ಅವ್ರಿಗೆ ಮೋದಿ ಹೇಳಿದ್ದೇನು ಗೊತ್ತಾ ?

ಕೆಲವು ದಿನಗಳ ಹಿಂದೆ  ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದು ಸ್ಯಾಂಡಲ್ ವುಡ್ ಸ್ಟಾರ್ ನಟ  ಸುದೀಪ್ ಅವರ ಹೇಳಿದ ಮಾತಿಗೆ ಬಾಲಿವುಡ್ ನಟ ಅಜಯ್ ದೇವಗನ್ ಅದನ್ನ ಪ್ರಶ್ನಿಸಿ  ಟ್ವಿಟರ್ ವಾಗ್ವಾದ ಮಾಡಿದರು. 

ಅದಾದ ಮೇಲೆ ಸುದೀಪ್ ಅವರ ಜಾಣತನದ ಉತ್ತರವನ್ನ ನೀಡಿ , ಅಜಯ ದೇವಗನ್ ಅವ್ರಿಗೆ ಅರಿವಾಗುವಂತೆ ಮಾಡಿದರು 



ಆದ್ರೆ ಅಂದು ನಡೆದ ಟ್ವಿಟರ್ ವಾಗ್ವಾದವನ್ನ ಗಮನಿಸಿದ ಪ್ರಧಾನಿ ಮೋದಿ ಅವರು , ಜೈಪುರದಲ್ಲಿ ನಡೆಯುತ್ತಿರುವ ಬಿಜೆಪಿಯ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಸಮಯದಲ್ಲಿ ಹೀಗೆ ಹೇಳಿದರು . 


‘ಪ್ರಾದೇಶಿಕ ಭಾಷೆಗಳ ಕುರಿತಾಗಿ ನಡೆಯುತ್ತಿರುವ ವಿವಾದಗಳನ್ನು ಗಮನಿಸುತ್ತಿದ್ದೇನೆ. ಇದು  ಆಗಬಾರದು. ನಾವುಗಳು ಪ್ರತಿಯೊಂದು ಭಾರತೀಯ ಭಾಷೆಯಲ್ಲಿ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವನ್ನು ಕಾಣುತ್ತೇವೆ.  ಭಾಷೆಗಳ ಆಧಾರದ ಮೇಲೆ ವಿವಾದಗಳು ಆಗಬಾರದು . ಎಲ್ಲಾ  ಭಾಷೆಗಳು ಪೂಜ್ಯನೀಯ. ಎಂದು ಹೇಳಿದರೆ . 



ಈ ಹಿನ್ನಲೆಯಲ್ಲಿ ಕಿಚ್ಚ ಸುದೀಪ್  ಅವ್ರು ಪ್ರಧಾನಿ ಮೋದಿಯವರ ಹೇಳಿಕೆಯನ್ನ ಸ್ವಾಗತಿಸಿ



 ಪ್ರಧಾನಿಯವರ ಬಾಯಿಂದ ಕೆಲವು ಸಾಲುಗಳು ಹೊರಬಿದ್ದಿರುವುದು ಗೌರವ ಹಾಗು ಸೌಭಾಗ್ಯವಾಗಿದೆ. ಅವ್ರ ಭಾಷೆಯನ್ನ ಪ್ರೀತಿಸೋ ಪ್ರತಿಯೊಬ್ಬರಿಗೂ ದೇಶದ ಪ್ರಧಾನ ಮಂತ್ರಿ ಈ ರೀತಿ ಮಾತಾಡೋದನ್ನ ನೋಡುವುದೇ ಸಂತೋಸದ ವಿಷಯ . ನಾನು ಯಾರನ್ನೂ ವಿವಾದಕ್ಕೆ ತಗೆದುಕೊಳ್ಳಲು ಪ್ರಯತ್ನಿಸುತ್ತಿಲ್ಲ, ಕೆಲವು ವಿಷಯಗಳಿಗೆ ಬಂದಾಗ ನನ್ನ ಅಭಿಪ್ರಾಯಗಳನ್ನು ಹೇಳುವ ಹಕ್ಕು ನನಗಿದೆ. ಎಂದು  ಸುದೀಪ್ ಅವರು ಪ್ರತಿಕ್ರಿಯೆ ನೀಡಿದರೆ 

ಶನಿವಾರ, ಡಿಸೆಂಬರ್ 25, 2021

ಬಿಸಿ ನೀರು ಒಳ್ಳೆಯದ ? ತಣ್ಣನೆಯ ನೀರು ಒಳ್ಳೆಯದ ?

 ಬೆಳಿಗ್ಗೆ ಎದ್ದು ಕೂಡಲೇ ನೀರು ಕುಡಿದ್ರೆ ಅನೇಕ ರೋಗಗಳಿಂದ ಮುಕ್ತರಾಗಬಹುದು .ದೇಹದ ಪ್ರತಿಯೊಂದು ಕಾರ್ಯವು ಸಲೀಸಾಗಿ ನಡೆಯಬೇಕಾದ್ರೆ  ನೀರು ಅತ್ಯಗತ್ಯ.  ಸರಿಯಾದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹ ಇದು ಅಗತ್ಯವಾಗಿರುತ್ತದೆ.


Photo by Nathan Dumlao on Unsplash


 ನಮ್ಮ ದೇಹದಿಂದ ನೀರ್ ಅನೇಕ ರೀತಿಯಲ್ಲಿ ಖಾಲಿಯಾಗುತ್ತಿರುತ್ತದೆ ಉಸಿರಾಟದ ಕಾರಣದಿಂದಾಗಿ ನಾವು ದಿನಕ್ಕೆ ಸರಾಸರಿ 250 ಮಿಲಿ ಕಳೆದುಕೊಳ್ಳುತ್ತೇವೆ, ಕೆಲಮೊಮ್ಮೆ ನಮ್ಮ ದೇಹದಿಂದ ನೀರು ಖಾಲಿ ಆಗುವ ಪ್ರಮಾಣವು  ಹವಾಮಾನ ಮತ್ತು ನಾವು ಮಾಡುತ್ತಿರುವ ಚಟುವಟಿಕೆಯ ಮೇಲೆ ಆಧರಿಸಿದೆ. ಪ್ರತಿದಿನ ಸಾಕಷ್ಟು ನೀರನ್ನು ಕುಡಿಯುವ ಮೂಲಕ ನಮ್ಮ ದೇಹದಿಂದ ಖಾಲಿಯಾದ ನೀರನ್ನು ಮತ್ತೆ ದೇಹಕ್ಕೆ ಒದಗಿಸಬೇಕು. 


Photo by Elisa Hane on Unsplash


ಪ್ರತಿ ದಿನ ಕನಿಷ್ಠ , 2 ಲೀಟರ್ - ದೇಹಕ್ಕೆ ಅತ್ಯಗತ್ಯವಾಗಿದೆ ಆದರೆ ಎಷ್ಟೋ ಜನರಿಗೆ ಒಂದು ಸಣ್ಣ ಕನ್ಫ್ಯೂಷನ್ ಇದೆ ಅದೇನಂದ್ರೆ ಬಿಸಿನೀರು ಕುಡಿಯಬೇಕಾ ? ಅಥವಾ ತಣ್ಣನೆಯ ನೀರು ಕುಡಿಯಬೇಕಾ ? ಎಂದು. ತಜ್ಞರು ಹಾಗು ಪ್ರಯೋಗಗಳು ಸಾಬೀತು ಮಾಡಿರುವುದು ಏನೆಂದ್ರೆ ಉಗುರು ಬೆಚ್ಚಗಿನ ನೀರು ದೇಹಕ್ಕೆ ತುಂಬ  ಒಳ್ಳೇದು ಎಂದು  ಯಾಕೆಂದ್ರೆ? 

Photo by Yosef Ariel on Unsplash


ಬೆಚ್ಚನೆಯ ನೀರಿಂದ ನಮ್ಮ ದೇಹದ ಒಳಾಂಗಗಗಳನ್ನ  ಮತ್ತು ಕರುಳಿನ ಚಲನಶೀಲತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸಲು ಬೆಚ್ಚಗಿನ ನೀರು ಹೆಚ್ಚು ಪರಿಣಾಮಕಾರಿಯಾಗಿದೆ

ಬೆಚ್ಚಗಿನ ನೀರು ರಕ್ತದ ಹರಿವನ್ನು ಉತ್ತೇಜಿಸುತ್ತದೆ, ಇದು ತಲೆನೋವು ಮತ್ತು ಉರಿಯೂತಕ್ಕೆ ಚಿಕಿತ್ಸೆ ನೀಡಲು ಅತ್ಯುತ್ತಮ ಪರಿಹಾರವಾಗಿದೆ.

ಬೆಚ್ಚನೆಯ ನೀರು  ಮಲವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸುಲಭವಾಗಿ ಹಾದುಹೋಗುವಂತೆ ಮಾಡುತ್ತದೆ

ಬೆಚ್ಚನೆಯ ನೀರು . ನಿಮ್ಮ ದೇಹದಾದ್ಯಂತ ರಕ್ತವನ್ನು ಹೆಚ್ಚು ಪರಿಣಾಮಕಾರಿಯಾಗಿ ಸಾಗಿಸಲು ಸಹಾಯ ಮಾಡುತ್ತದೆ.

ಬಿಸಿನೀರು ಕುಡಿಯುವುದರಿಂದ ನಿಮ್ಮ ಚರ್ಮದ  ಹೊಳಪನ್ನ ಹೆಚ್ಚಿಸುತ್ತದೆ ಮತ್ತು ಚರ್ಮವು ಮೃದುವಾಗುತ್ತದೆ.


                                                          Photo by Aaron Burden on Unsplash

ಹಾಗಾಗಿ  ನಮ್ಮ ದೇಹದ ಆರೋಗ್ಯವನ್ನ ಕಾಪಾಡುವ ಬೆಚ್ಚನೆಯ ನೀರನ್ನು ಹೆಚ್ಚು ಹೆಚ್ಚು ಕುಡಿದು ನಿಮ್ಮ ದೇಹವನ್ನ ಸದೃಢವಾಗಿ ಇಟ್ಟುಕೊಳ್ಳಿ 



ಶುಕ್ರವಾರ, ಡಿಸೆಂಬರ್ 24, 2021

ಮೊನಾಲಿಸಾ ಪೇಂಟಿಂಗ್ ಹಿಂದಿರುವ ರೋಚಕ ಕಹಾನಿ

 ಮೊನಾಲಿಸಾ ಚಿತ್ರ ಯಾರಿಗೆ ಇಷ್ಟವಾಗಲ್ಲಾ ಹೇಳಿ . ಕವಿಗಳಂತೂ ಮೊನಾಲಿಸಾ ನಗುವಿನಾ  ಸಾರವನ್ನ  ತಮ್ಮ ಕವಿತೆಗಳ ಮೂಲಕ ಹೋಗುಳುತ್ತಾನೆ ಇರುತ್ತಾರೆ . 

Photo by Eric TERRADE on Unsplash

ಈ ಮೇರು ಕೃತಿಗಳ ಮಹಾನ್ ಸೃಷ್ಟಿಕರ್ತರಾದ ಲಿಯೊನಾರ್ಡೊ ಡಾ ವಿನ್ಸಿ ಈ ವಿಶ್ವ ಕಂಡ ಅಮೋಘ ಪ್ರತಿಭೆ.ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಕಾರ ಮೋಸ್ಟ್ ವ್ಯಾಲ್ಯೂಯೇಬಲ್ ‌ಪೇ೦ಟಿಂಗ್ ಎಂದು ದಾಖಲಾಗುತ್ತದೆ. ಮೊನಾಲಿಸಾ ಇಡೀ ಜಗತ್ತಿನಲ್ಲೇ ಪ್ರಸಿದ್ದವಾದ , ಅತಿ ಹೆಚ್ಚು ಖರೀದಿಸಿದ ತೈಲ ವರ್ಣಚಿತ್ರವಾಗಿದೆ.ಈ ಚಿತ್ರದ ಬಗ್ಗೆ ಅನೇಕ ದಂತಕಥೆಗಳಿವೆ . 

ಕೆಲವರ ಪ್ರಕಾರ ಮೊನಾಲಿಸಾ ಚಿತ್ರವೂ  ಲಿಸಾ ಗೆರಾರ್ಡಿನಿ ಯಾ ಚಿತ್ರ ಎಂದು ನಂಬಲಗಿದೆ .  ಅವಳು ಫ್ಲಾರೆನ್ಸ್‌ನ ಫ್ರಾನ್ಸೆಸ್ಕೊ ಡೆಲ್ ಜಿಯೊಕೊಂಡೊ ಎಂಬ ಶ್ರೀಮಂತ ರೇಷ್ಮೆ ವ್ಯಾಪಾರಿಯ ಹೆಂಡತಿಯಾಗಿದ್ದಳು. ಅವರ ನೆನಪಿಗಾಗಿ ಇಟಲಿಯ ಲಿಯೊನಾರ್ಡೊ ಡಾ ವಿನ್ಸಿ ಎಂಬ ಚಿತ್ರಗಾರನಿಂದ ರಚಿಸಿದರು ಎಂದು ಹೇಳಲಾಗಿದೆ . 

Photo by Free Birds on Unsplash

ಇನ್ನು ಕೆಲವರ ಪ್ರಕಾರ ಮೊನಾಲಿಸಾ ಚಿತ್ರವೂ   ಲಿಯೊನಾರ್ಡೊ ಡಾ ವಿನ್ಸಿ ಅವರ ತಾಯಿ ಯಾ ಚಿತ್ರವಾಗಿದೆ ಎಂದು ಹೇಳುತ್ತಾರೆ , ತಾಯಿಯನ್ನ ಅಪಾರವಾಗಿ ಪ್ರೀತಿಸುತ್ತಿದ್ದ   ಲಿಯೊನಾರ್ಡೊ ಡಾ ವಿನ್ಸಿ  ಅವರ ಸವಿನೆನಪಿಗಾಗಿ ಇದನ್ನ ಚಿತ್ರಿಸಿದರು ಎಂದು ಹೇಳಲಾಗಿದೆ . ಮತ್ತೊಂದು ಸಿದ್ಧಾಂತವು ವಾಸ್ತವವಾಗಿ ಲಿಯೊನಾರ್ಡೊ ಅವರ ಭಾವಚಿತ್ರವೇ  ಮಹಿಳೆಯ  ರೂಪದಲ್ಲಿ  ಚಿತ್ರಿಸಿದರೆ ಎಂದು ಹೇಳಲಾಗಿದೆ .1519ರಲ್ಲಿ  ಲಿಯೊನಾರ್ಡೊ ಡಾ ವಿನ್ಸಿ ಯಾ ಮರಣದ ನಂತರ    ಭಾವಚಿತ್ರವನ್ನು ಫ್ರೆಂಚ್ ಅರಮನೆಗಳಲ್ಲಿ ಸೇರಿಸಲಾಯಿತು. ಇದು ರಾಜಮನೆತನದ ಸಂಗ್ರಹದ ಭಾಗವಾಯಿತು.

ಆದರೆ ಈ ಪೇಂಟಿಂಗ್ ಗೆ ಹೆಚ್ಚು ಪ್ರಚಾರ ಸಿಕ್ಕಿದು ಅದರ ಕಳ್ಳತನವಾದಗ 


Photo by Dabbas on Unsplash


"ಮೋನಾಲಿಸಾ" ಚಿತ್ರವನ್ನ ವಿನ್ಸೆಂಜೊ ಪೆರುಗ್ಗಿಯಾ ಎಂಬ ಇಟಲಿಯ ಪ್ರಜೆ 1911 ರ ಆಗಸ್ಟ್ 20 ರಿಂದ 21 ರ  ರಾತ್ರಿಯಲ್ಲಿ  ಯಾರಿಗೂ ತಿಳಿಯದ ಹಾಗೆ ಅದನ್ನ ಕದ್ದನು. ಆತನ ಪ್ರಕಾರ ಈ ಚಿತ್ರವು ಇಟಲಿಗೆ ಸೇರಿದ್ದು , ಕಾರಣ  ಲಿಯೊನಾರ್ಡೊ ಡಾ ವಿನ್ಸಿ ಇಟಲಿಯವನು ಆಗಿದ್ದ ಫ್ರಾನ್ಸ್ ಅದರ ಮೇಲೆ ಹಕ್ಕನ್ನು ಹೊಂದಿರುವುದು ಆತನಿಗೆ ಇಷ್ಟವಿರಲಿಲ್ಲಾ ಹಾಗಾಗಿ ಆತ ಅದನ್ನ ಕದ್ದನು .


 ಆ ನಂತರ ಫ್ರಾನ್ಸ್ ಸರ್ಕಾರ ಎಲ್ಲಾ ಕಡೆ ಹುಡುಕಿದರೂ ಅವ್ರಿಗೆ ಈ  ಪೇಂಟಿಂಗ್ ಸಿಗಲಿಲ್ಲಾ ಆದರೆ ಫ್ರಾನ್ಸ್  ಜನರು ಈ ವಿಷ್ಯವನ್ನ ಕೇಳಿ ಆಸಕ್ತಿಯಿಂದ ಪೇಂಟಿಂಗ್ ನೇತುಹಾಕಿದ ಜಾಗವನ್ನ ನೋಡಲು ಬರುತ್ತಿದ್ದರು ಇದ್ರಿಂದ ಫ್ರಾನ್ಸ್  ದೇಶದಲ್ಲಿ ಆ ಪೇಂಟಿಂಗ್  ವಿಶೇಷವಾದ ಸ್ಥಾನ ಪಡೆದಿತ್ತು ಎರಡು ವರ್ಷಗಳ ನಂತರ   ಫ್ಲಾರೆನ್ಸ್‌ನಲ್ಲಿನ ಕಲಾ ವ್ಯಾಪಾರಿಯೊಬ್ಬರು ವ್ಯಕ್ತಿಯೊಬ್ಬರು ತನಗೆ  ಮೊನಾಲಿಷಾ ಚಿತ್ರಕಲೆಯನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ ಎಂದು ಫ್ರಾನ್ಸ್  ಸ್ಥಳೀಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಎಚೆತ್ತ ಫ್ರಾನ್ಸ್ ಸರ್ಕಾರ ಮೊನಾಲಿಸಾ ಚಿತ್ರ ಕದ್ದ ಕಳ್ಳನನ್ನ ಬಂದಿಸಿ , ಪೇಂಟಿಂಗ್ ನ್ನ ತನ್ನ ವಶಕ್ಕೆ ಪಡೆದುಕೊಳ್ಳುತ್ತಾರೆ  


 ಆ ನಂತರ ಫ್ರಾನ್ಸ್‌  ಕಾನೂನಿನ ಪ್ರಕಾರ ಮೊನಾಲಿಸಾ ಪೇ೦ಟಿಂಗನ್ನು ಮಾರಲು ಅಥವಾ ಖರೀದಿಸಲು ಮಾಡುವ೦ತಿಲ್ಲ ಹಾಗು ಇದಕ್ಕೆ ಬೇಕಾದ ಸೂಕ್ತವಾದ ಭದ್ರತೆಯನ್ನ ಒದಗಿಸಿದರು.  ಅಲ್ಲಿಂದ ಮೊನಾಲೀಶ ಪೇಂಟಿಂಗ್ ಜಗತ್ ಪ್ರಸಿದ್ಧವಾಗುತ್ತೆ  




ಬುಧವಾರ, ಡಿಸೆಂಬರ್ 22, 2021

ಫೇಸ್ಬುಕ್ ಶುರುವಿನ ಹಿಂದೆಯಿದೆ ಒಂದು ರೋಚಕ ಕಥೆ

  • ಫೇಸ್ಬುಕ್ ಆದುನಿಕ ಕಾಲದ ಸಂಪರ್ಕ ಸೇತುವೆ  ಚಿಕ್ಕಮಗುವಿಂದ ಹಿಡಿದು ದೊದ್ದವರವರೆಗೂ ಪ್ರತಿಯೊಬ್ಬರು ಫೇಸ್ಬುಕ್ ಮೇಲೆ ಎಷ್ಟೋ ವಿಷಯಗಳಿಗೆ ಅವಲಂಬಿತರಗಿದ್ದಾರೆ 

Photo by Firmbee.com on Unsplash


 ಈ ಫೇಸ್ಬುಕ್ ಶುರುವಾದ ರೋಚಕ ಕಥೆಯನ್ನ ಕೇಳಿದ್ರೆ ನೀವು ಆಶ್ಚರ್ಯಪಡ್ತೀರಾ !!!

Photo by Solen Feyissa on Unsplash


2003 ರಲ್ಲಿ, ಹಾರ್ವರ್ಡ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದ ಜುಕರ್‌ಬರ್ಗ್ ಅವನ್ನ  collageನ ಸ್ಟೂಡೆಂಟ್ ಗಳ  ಜೊತೆ ಸಮಯವನ್ನ ಕಳೆಯಲು  ಫೇಸ್‌ಮ್ಯಾಶ್ ಎಂಬ ವೆಬ್‌ಸೈಟ್‌ನ್ನ ಶುರು ಮಾಡುತ್ತಾನೆ.  

Photo by Austin Distel on Unsplash


ಅವನ್ನ ವೆಬ್ಸೈಟ್ famous ಆಗುವುದಕ್ಕೆ  ತನ್ನ ಚಾಣಕ್ಷತೆ ಬಳಸಿ  ಕಾಲೇಜಿನ   ಹಾಸ್ಟೆಲ್ ನಲ್ಲಿದ್ದ  ಕಂಪ್ಯೂಟರ್ ನ್ನ  ಹ್ಯಾಕಿಂಗ್ ಮಾಡಿ ಅಲ್ಲಿದ್ದ ಕೆಲವು ಫೋಟೋಗಳನ್ನ ತಗೆದುಕೊಂಡು ತನ್ನ ವೆಬ್ಸೈಟ್ ಗೆ ಅಪ್ಲೋಡ್  ಮಾಡಿದ.

ವೆಬ್‌ಸೈಟ್ ಬಳಸುವ  ವಿದ್ಯಾರ್ಥಿಗಳು  ಇಬ್ಬರು ವಿದ್ಯಾರ್ಥಿಗಳ ಫೋಟೋಗಳನ್ನು ಅಕ್ಕಪಕ್ಕದಲ್ಲಿ  ಇಟ್ಟು ಹೋಲಿಸಿ  ಯಾರು "ಹಾಟ್" ಮತ್ತು ಯಾರು "ಅಲ್ಲ" ಎಂಬುದನ್ನು ನಿರ್ಧರಿಸಬಹುದಿತ್ತು . 

Photo by Alexander Shatov on Unsplash


 ಇದರಿಂದ  ಆ ವೆಬ್ಸೈಟ್ ತುಂಬ ಫೇಮಸ್ ಆಯಿತು.   ಕೇವಲ 4 ಗಂಟೆಗಳಲ್ಲಿ 22,000 ವೀಕ್ಷಣೆಗಳನ್ನು ಆಕರ್ಷಿಸಿತು. ಜುಕರ್‌ಬರ್ಗ್‌ ಹಾಸ್ಟೆಲ್ ನ ಕಂಪ್ಯೂಟರ್ ನ್ನ ಹ್ಯಾಕ್ ಮಾಡಿ ಫೋಟೋಗಳನ್ನ ಕದ್ದಿರುವ ವಿಷಯ ತಿಳಿದ ಹಾರ್ವರ್ಡ್‌ನ ವಿಶ್ವವಿದ್ಯಾನಿಲಯವು ಕೆಲವೇ ದಿನಗಳಲ್ಲಿ ಆ ವೆಬ್ಸೈಟ್ ನ್ನ ಮುಚ್ಚಿಸಿತು. ಜುಕರ್‌ಬರ್ಗ್, ಕಾಲೇಜ್ ನಿಂದ ಸಸ್ಪೆಂಡ್ ಆಗುವುದನ್ನ ತಮ್ಮ ಬುದ್ದಿವಂತಿಕೆಯಿಂದ ಹೇಗೋ ತಪ್ಪಿಸಿಕೊಂಡರು.

Photo by Glen Carrie on Unsplash

ಅ ನಂತರ ಜುಕರ್‌ಬರ್ಗ್ ಫೇಸ್ ಮಾಸ್ ಗೆ ಸಿಕ್ಕ ಜನಪ್ರಿಯತೆಯನ್ನ ಗಮನಿಸಿ, ಹೊಸ ವೆಬ್ಸೈಟ್ ಮಾಡುವ ಆಲೋಚನಿಗೆ ಬಂದಿದ್ದ . ಹಾರ್ವರ್ಡ್‌ನಲ್ಲಿರುವ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳೊಂದಿಗೆ ಸಂಪರ್ಕಿಸಲು ಬಳಸಬಹುದಾದ ಸಾಮಾಜಿಕ ನೆಟ್‌ವರ್ಕಿಂಗ್ ನ ವೆಬ್ಸೈಟ್ ನ್ನ ಅತಿ ಬೇಗ ಶುರುಮಾಡಿದ್ದ. ಅದರ ಬಗ್ಗೆ ಕಾಲೇಜು ನ ಪ್ರತಿಯೊಬ್ಬರಿಗೆ ಪಾಂಪ್ಲೆಟ್ ಹಂಚುವ ಮೂಲಕ ತಿಳಿಸಿದ .ಕಾಲೇಜು ನ ಎಲ್ಲಾ ವಿದ್ಯಾರ್ಥಿಗಳು ಸಂತೋಸದಿಂದ ಅದನ್ನ ಬರಮಾಡಿಕೊಂಡರು .

Photo by Alexander Shatov on Unsplash

ಫೇಸ್ ಮಾಸ್ ಅನ್ನುವ ಹೆಸರು ಫೇಸ್ಬುಕ್ಯಾಗಿ ಬದಲಾಯಿತು. ಫೇಸ್ಬುಕ್ ಆರಂಭವಾದ ಕೇವಲ 24 ಗಂಟೆಯಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು ಸುಮಾರು 1,200 ವಿದ್ಯಾರ್ಥಿಗಳು ತಮ್ಮ ಇಮೇಲ್ ಇಡಿ ಗಳನ್ನ ಬಳಸಿ ಸೈನ್ ಅಪ್ ಅಗಿದರು. ಕೇವಲ ಒಂದು ತಿಂಗಳೊಳಗೆ, ಎಲ್ಲಾ ಹಾರ್ವರ್ಡ್ ಪದವಿಪೂರ್ವ ವಿದ್ಯಾರ್ಥಿಗಳಲ್ಲಿ ಅರ್ಧದಷ್ಟು ಮಂದಿ ಫೇಸ್ಬುಕ್ ನಲ್ಲಿ ಪ್ರೊಫೈಲ್ ಹೊಂದಿದ್ದರು.ಕೆಲವೇ ದಿನಗಳಲ್ಲಿ U.S. ನಲ್ಲಿದ್ದ ಇತರ ಮೂರು ಕಾಲೇಜು ಕ್ಯಾಂಪಸ್‌ನ ವಿದ್ಯಾರ್ಥಿಗಳು ಇದರಿಂದ ಆಕರ್ಷಿತರಾಗಿ ಬಳಸಲು ಶುರು ಮಾಡಿದರು.


Photo by Souvik Banerjee on Unsplash


ನಂತರ ಆಗಸ್ಟ್ 2005 ರಲ್ಲಿ ವೆಬ್ಸೈಟ್ ಖರೀದಿಸದ ನಂತರ Facebook.com ಆಯಿತು. ನಂತರ ಅದು ಪ್ರಪಂಚದಾದ್ಯಂತ ಹರಡಲು ಪ್ರಾರಂಭಿಸಿತು,2006ರಲ್ಲಿ ಫೇಸ್ಬುಕ್ ನ್ನ ಪ್ರಪಂಚ ಎಲ್ಲಾ ವರ್ಗದ ಜನ ತಮ್ಮ ಮೇಲ್ ಇಡಿ ಮೂಲಕ ಪ್ರೊಫೈಲ್ ನ್ನ ಹೊಂದಲು ಶುರುಮಾಡಿದರು .ಇಂದು ಫೇಸ್ಬುಕ್ ನಮ್ಮನಿಮ್ಮೆಲ್ಲರ ಮನೆಮಾತಾಗಿದೆ.



<

ಇನ್ನಷ್ಟು ಓದಿ »

ಸೋಮವಾರ, ಜೂನ್ 28, 2021

ನಮ್ಮ ಇತಿಹಾಸದಲ್ಲಿ ಮಾವಿನ ಹಣ್ಣಿನ ತಾಕತ್ತು ಹೇಗಿದೆ ಗೊತ್ತಾ ?

ತಿಂದಷ್ಟೂ ರುಚಿ ಮುಗಿದಷ್ಟು ಇನ್ನೂ ಬೇಕೆನ್ನೋ ಹಣ್ಣಿನ ಜಾಗದಲ್ಲಿ  ಮೊದಲನೇ  ಸ್ಥಾನವನ್ನ ನಮ್ಮ ಹಣ್ಣಿನ ರಾಜನಿಗೆ ಕೊಡ್ಬೇಕು.ಹಣ್ಣಿನ ರಾಜ ಅಂದ ಕೂಡಲೇ  ನಿಮ್ಮೆಲ್ಲರ ಬಾಯಿನಲ್ಲಿ ನೀರು ಬರುತ್ತಿರಬಹುದು ಆಲ್ವಾ,?ಅದೇ ನೋಡಿ ಮಾವಿನ ಹಣ್ಣಿನ ತಾಕತ್ತು. 


Photo by Riki Risnandar from Pexels

ಈ ಹಣ್ಣಿಗೆ ಮ್ಯಾಂಗೋವೆಂದು ಹೆಸರು ಬರುವುದಕ್ಕೆ ಕಾರಣವೇನು ಗೊತ್ತಾ ?  



ಮಾವಿನ ಹಣ್ಣುನನ್ನ ಹಿಂದೆ ಅಮ್ರಾ-ಫಾಲ್ ಎಂದು ಕರೆಯುತಿದ್ದರು ಎಂದು ನಮ್ಮ ವೈದಿಕ ಸಾಹಿತ್ಯದಲ್ಲಿಯೂ ಉಲ್ಲೇಖಿಸಲಾಗಿದೆ. ಹೀಗೆ ಒಮ್ಮೆ ಕವಿ ಕಾಳಿದಾಸ ಅವರು ಮಾವಿನ ಹಣ್ಣಿನ ರುಚಿಗೆ ಮನಸೋತು ಅದರ ಬಗ್ಗೆ ಒಂದು ಸುಂದರವಾದ ಸ್ತುತಿಗೀತೆನ  ಬರೆದು ಹಾಡುತ್ತಾ ಹೊಗಳುತ್ತಿರುತ್ತಾರೆ . 


ಒಮ್ಮೆ ಅವರು ಹಾಡುತ್ತಾ ದಕ್ಷಿಣ ಭಾರತದ  ತಮಿಳುನಾಡನ್ನು ತಲುಪಿದಾಗ ಆ ಸ್ತುತಿಗೀತೆನ ಅಲ್ಲಿನ ಜನರು ಆಕರ್ಷಿತವಾಗಿ ಕೇಳಿ ಮಾವಿನ ಹಣ್ಣಿನ ಬಗ್ಗೆ ಕುತೂಹಲದಿಂದ ಮಾತಾಡುತ್ತಾರೆ .ಅಲ್ಲಿನ ಜನ  ಅಮ್ರಾ-ಫಾಲ್ ಎಂದು ಕರೆಯುತ್ತಿದ್ದ  ಮಾವಿನ ಹಣ್ಣುನ್ನ  ಆಮ್ - ಕೇ ಎಂದು ಉಚ್ಛರಿಸುತ್ತಾರೆ . 



Photo by Gowri Subramanya on Unsplash
ಅನಂತರ ಮಲಯಾಳಿ ಜನರು ಇದನ್ನ ಮಂಗಾ ಎಂದು ಉಚ್ಚಾರಣೆ ಮಾಡುತ್ತಾರೆ.ಕ್ರಮೇಣ ಕೇರಳಕ್ಕೆ ಬಂದ ಪ್ರೋಚುಗಿಸರು ಮಾವಿನ ಹಣ್ಣಿನ ಸಿಹಿಯನ್ನು ಸವಿದು ಮ್ಯಾಂಗೋ ಎಂದು ಉಚ್ಚರಿಸುತ್ತಾರೆ, ಅಂದಿನಿಂದ ಇಂಗ್ಲಿಷರ ಪಾಲಿಗೆ ಇದು ಮ್ಯಾಂಗೋವಾಗಿದೆ ನಮ್ಮ ಎಲ್ಲರ ಮಾವಿನ ಹಣ್ಣು . 





ಈ ಮಾವಿನ ಹಣ್ಣಿನ ಸಿಹಿಯ ಬಗ್ಗೆ ಅದ್ಭುತವಾಗಿ ಬರೆದು ವಿಶ್ವವಿಖ್ಯಾತ ಮಾಡಿದ  ಕೀರ್ತಿ ಕ್ರಿ.ಶ 632 ರಲ್ಲಿ ಭಾರತಕ್ಕೆ ಭೇಟಿ ನೀಡಿದ ಚೀನಾದ ಪ್ರವಾಸಿ ಹ್ಸೀನ್-ತ್ಸಾಂಗ್ ಗೆ ಸೇರಬೇಕು . ಪ್ರವಾಸಿಗರಾಗಿ ಭಾರತಕ್ಕೆ ಬಂದ ಹ್ಸೀನ್-ತ್ಸಾಂಗ್ ,ಇಲ್ಲಿನ ವೇಷಭೂಷಣಗಳು ಆಹಾರ ಪದ್ದತಿಗಳನ್ನ ಅಭ್ಯಾಸ ಮಾಡುತ್ತಿರುತ್ತಾರೆ .


  ಆಗ ಅವರ ಮನ ಗೆದ್ದಿದು ಈ ನಮ್ಮ ಮಾವಿನ ಹಣ್ಣು ,ಇದರ ರುಚಿಗೆ ಸೋತ ಅವರು ಇದರ ಬಗ್ಗೆ ಎಲ್ಲಡೆ ಹೇಳಿದರು  

Photo by Deon Black on Unsplash
ನೋಡಿ,ಮಾವಿನ ಹಣ್ಣಿನ ರುಚಿಯಿಂದ ಇತಿಹಾಸದಲ್ಲಿ ಏನೆಲ್ಲಾ ಅಗಿದೆಂದು ,ಅದಕ್ಕೆ ಹೇಳೋದು ಹಣ್ಣುಗಳ ರಾಜ ಅಂತ . 
Photo by pariwat pannium on Unsplash

ಆ ನಂತರ ನಮ್ಮ ಭಾರತಕ್ಕೆ ಬಂದ ಮೊಘಲ್ ಸಾಮ್ರಾಜ್ಯದಲ್ಲಿ ಈ ಮಾವಿನ ಹಣ್ಣಿಗೆ ಇದ್ದ ಸ್ಥಾನ - ಮನ ಹಾಗೂ  ಮುಗಿಯಲಾರದ ನಂಟು ಹೇಗಿತ್ತು ಗೊತ್ತಾ ?


ಒಮ್ಮೆ ಮೊಘಲ್ ದೊರೆ ಬಾಬರ್ ಗೆ ,ಪಾಣಿಪತ್ ಕದನ ದಲ್ಲಿ ಇಬ್ರಾಹ್ಮಿನ್ ಲೋಧಿ ವಿರುದ್ಧ ಹೋರಾಡಲು ಆಹ್ವಾನವು  ಅಂದಿನ  ಆಡಳಿತಗಾರ ಲೋಧಿಯಿಂದ ಬರುತ್ತದೆ . ಆ ಸಮಯದಲ್ಲಿ  ಮೊಘಲರ  ಮನಸ್ಸನ್ನು ಹೇಗಾದರೂ ಮಾಡಿ ಗೆದ್ದು ಅವರನ್ನ ಯುದ್ಧದಲ್ಲಿ ಭಾಗವಹಿಸುವ ಹಾಗೆ ಮಾಡಬೇಕು ಎಂದು ಕಿಲಾಡಿ ಲೋದಿ ಮಾವಿನ ಹಣ್ಣನ್ನು ಆಹ್ವಾನ ಜೊತೆಗೆ ಸ್ನೇಹದ  ಕಾಣಿಕೆಯಾಗಿ ಸವಿಯಲು ಕಳಹಿಸಿಕೊಟ್ಟಿರುತ್ತಾನೆ .


Photo by cottonbro from Pexels

ಮಾವಿನ ಹಣ್ಣನ್ನು ಸವಿದ ಮೊಘಲ್ ದೊರೆ ಬಾಬರ್ ಲೋದಿಯ ಆಹ್ವಾನವನ್ನ ಸ್ವೀಕರಿಸಿ ಯುದ್ಧಕ್ಕೆ ಹೋಗುತ್ತಾನೆ .ಈ ಯುದ್ಧನೇ ಮುಂದೆ ಪಾಣಿಪತ್ ಯುದ್ಧ ಎಂದು ಪ್ರಸಿದ್ದಿ ಪಡೆಯುತ್ತದೆ. 

ಇಲ್ಲಿಂದ ಮಾವಿನ ಹಣ್ಣು ಹಾಗು ಮೊಘಲರ ನಂಟು ಭರ್ಜರಿಯಾಗಿ ಬೆಸೆದುಕೊಳ್ಳುತ್ತದೆ. ಒಂದು ತರ ಏಳೇಳು ಜನ್ಮದ ನಂಟಿನ ತರ 

Photo by Charles Deluvio on Unsplash

ಆ ನಂತರ ಬಂದ ಮೊಗಲ್ ದೊರೆ ಬಾಬರ್ ಅವರ ಪುತ್ರ ಹುಮಾಯೂನ್ ವರನ್ನು ಚೌಸಾ ಕದನದಲ್ಲಿ ಶೇರ್ ಷಾ ಸೂರಿ ಸೋಲಿಸಿದರು. ಆಗ ಹುಮಾಯೂನ್ ಭಾರತದಿಂದ ಪಲಾಯನ ಮಾಡಬೇಕಾಯಿತು ,ಹೀಗೆ ಓಡಿಹೋಗುವಾಗ ಅವನ ದಣಿವನ್ನ ನಿವಾರಿಸಲು ಜೊತೆಗೆ ಇದ್ದಿದು ಆಪ್ತರಕ್ಷಕ ಮಾವಿನ ಹಣ್ಣು .ನಂತರ ಆ ನೆನಪಿಗಾಗಿ ಮಾವಿನ ಹಣ್ಣಿನ ಒಂದು ಕಸಿಗೆ 'ಹುಮಾಯೂನ್ ಪಸಂದ್' ಎಂದು ಕರೆಯುತ್ತಾರೆ, ಅದೆ ಮಾವಿನ ಹಣ್ಣು ಈಗ ಇಮಾಮ್ ಪಸಂದ್ ಎಂದು ಪ್ರಸಿದ್ಧಿಯಾಗಿದೆ. 

 ಆ ನಂತರ ಬಂದ ಅಕ್ಬರ್ ನ  ಅರಮನೆಯಲ್ಲಿ ಹಾಗು ಮನಸ್ಸಿನಲ್ಲಿ ಮಾವಿನ ಹಣ್ಣಿಗೆ ವಿಶೇಷವಾದ ಜಾಗವಿತ್ತು . ಮಾವಿನ ಹಣ್ಣುಗಳನ್ನ ಸವಿಯಲು ಒಂದು ದೊಡ್ಡ ದೊಡ್ಡ ಉದ್ಯಾನವನ್ನು ನಿರ್ಮಿಸಿದರು ,ಅಲ್ಲಿ ಅವರು ಒಂದು ಲಕ್ಷ ಮಾವಿನ ಮರಗಳನ್ನು ನೆಟ್ಟರು .ಈ ಉದ್ಯಾನಕ್ಕೆ 'ಲಖಿ ಬಾಗ್' ಎಂದು ಹೆಸರಿಸಲಾಯಿತು.  

 ಆ ನಂತರ  ಬಂದ ಜಹಾಂಗೀರ್‌ಗೆ ಮಾವಿನಹಣ್ಣುಗಳು ಅಂದ್ರೆ ವಿಶೇಷವಾಗಿ ಪ್ರಿಯವಾಗಿದ್ದವು ,ಇವರು ಈ ಮಾವಿನ ಹಣ್ಣನು ಹೆಚ್ಚಾಗಿ ಪ್ರೀತಿಯ ಸಂಕೇತವಾಗಿ ಬಳಸುತ್ತಿದ್ದರು. 

 ಇವರ ಮನ ಗೆಲ್ಲಲು ಇವರ ಪ್ರಿಯ ಪತ್ನಿ ನೂರ್ ಜಹಾನ್ ಜಹಾಂಗೀರ್ ಗಾಗಿ ಮಾವಿನಹಣ್ಣು ಮತ್ತು ಗುಲಾಬಿಗಳಿಂದ ವೈನ್ ತಯಾರಿಸುತ್ತಿದ್ದರು. 

ಇವರು ಮಾವಿನ ಹಣ್ಣಿನಿಂದ ವಿವಿಧ ರೀತಿಯ ಪಾಕಗಳನ್ನ  ಮಾಡಿ ಸವಿಯುತ್ತಿದ್ದರು 


Photo by Arun Thomas from Pexels
 ಆ ನಂತರ ಬಂದ ರಾಜ ಷಹಜಹಾನ್ ಗೆ ಮಾವಿನ ಹಣ್ಣು ಅಂದ್ರೆ ಹುಚ್ಚು ಪ್ರೀತಿ ಅದಕೋಸ್ಕರ ಅವರು ಯಾರನ್ನೆಲ್ಲಾ ಎದರುಹಾಕಿಕೊಂಡರು  ಗೊತ್ತಾ ?

ಮ್ಮೆ ತನ್ನ ಅರಮನೆಯ ತೋಟದ ಮುಂದೆ ಮಾವಿನ ಮರಗಳನ್ನ ಹಾಕಿಸಿ , ಸಿಹಿಯಾದ ಹಣ್ಣುಗಳನ್ನ ಚಪರಿಸಲು ಪ್ರತಿ ದಿನ ಮಾವಿನ ಹಣ್ಣು ಆಗುವುದನ್ನ ಕಾಯುತ್ತ  ಹಣ್ಣಿಗಾಗಿ ಆಶೆಯ ಕಣ್ಣುಗಳಿಂದ ನೋಡುತ್ತಾ ಇರುತ್ತಾರೆ . 


Photo by Suraj R on Unsplash

ಹೀಗಿರುವಾಗ ಒಮ್ಮೆ ಇವರ ಮಗ ಔರಂಗಜೇಬ್ ಯಾರಿಗೂ ತಿಳಿಯದ ಹಾಗೆ ಎಲ್ಲಾ ಮಾವಿನ ಹಣ್ಣುಗಳನ್ನ ತಿನ್ನುತ್ತಾನೆ.  


ಮಾವಿನ ಹಣ್ಣಿಗಾಗಿ ಹಗಲು ಕನಸು ಕಾಣುತ್ತಿದ್ದ  ರಾಜ ಷಹಜಹಾನ್ ಗೆ ಮರದಲ್ಲಿ ಹಣ್ಣುಗಳು ಇಲ್ಲಾದಿರುವುದು ನೋಡಿ ಸಿಕ್ಕಾಪಟ್ಟೆ ಕೋಪಬರುತ್ತದೆ .ಅನಂತರ  ಹಣ್ಣುಗಳನ್ನ ಯಾರು ಕಿತ್ತಿದ್ದಾರೆ ಎಂದು ಪತ್ತೆಹಚ್ಚಲು ಹೋದಾಗ ತನ್ನ ಮಗ ಔರಂಗಜೇಬ್ ಈ ಕೆಲಸ ಮಾಡಿದ್ದಾನೆ ಎಂದು ತಿಳಿದು ಬಂದಾಗ ,ಸಿಟ್ಟಾದ ಷಹಜಹಾನ್ ಆತನನ್ನ  ಒಂದು ರೂಮಿನಲ್ಲಿ    ಕೂಡಿಹಾಕುತ್ತಾನೆ. ನಂತರ ಷಹಜಹಾನ್ ಗೆ  ಇದ್ದ  ಮಾವಿನಹಣ್ಣಿನ ಮೇಲಿನ  ಆ ದಿನದ ಆಶೆಯ ದಾಹವನ್ನ ನಿವಾರಿಸಲು  ಸಾಮ್ರಾಜ್ಯಶಾಹಿಯ  ಅಡಿಗೆಮನೆಯಲ್ಲಿ ಬಗೆಬಗೆಯ  ಪಾಕವಿಧಾನಗಳನ್ನು ತಯಾರಿಸಿ ಬಡಿಸುತ್ತಾರೆ.   

Photo by Daria Shevtsova from Pexels

 ವಿಶೇಷವೇನಂದ್ರೆ ಮುಂದೆ ಔರಂಗಜೇಬ್ ಗೆ ಹಿರಾಬಾಯ್ ಅವರೊಂದಿಗಿನ ಪ್ರೇಮಕಥೆಯು ಈ  ಮಾವಿನಹಣ್ಣಿನೊಂದಿಗೆ  ಹೆಣೆದುಕೊಂಡಿದೆ. 

ಒಮ್ಮೆ ಔರಂಗಜೇಬ ತನ್ನ ಆಂಟಿಯ ಮನೆಗೆ ಬಂದಾಗ ಇವರ ಕಣ್ಣುಗಳು  ಮಾವಿನ ಮರದಲ್ಲಿ ಹಣ್ಣನು ಕುಯುತ್ತಾ  ಹಾಡುತಿದ್ದ ಹಿರಾಬಾಯ್ ಕಡೆ ಹೋಗುತ್ತದೆ. ಮೊದಲ ನೋಟದ್ಲಲೇ ಮಾವಿನ ತೋಟದಲ್ಲಿ ಔರಂಗಜೇಬನಿಗೆ ಹಿರಾಬಾಯ್ ಮೇಲೆ ಪ್ರೀತಿಯಾಗುತ್ತದೆ ,ಅಲ್ಲಿಂದ ಆಗಿದ್ದು ಎಲ್ಲಾ  ಇತಿಹಾಸ 

ನೋಡಿದ್ರಲ್ಲಾ   ನಮ್ಮ ಮಾವಿನ ಹಣ್ಣು ಏನೆಲ್ಲಾ ಕಿತಾಪತಿ ಮಾಡಿದೆಂತ , ಇತಿಹಾಸದಲ್ಲಿ ತನ್ನದೇ ಅದ ಸ್ಥಾನವನ್ನು ತಗೆದ್ಕೊಂಡಿದೆ 

Photo by Ali Zolghadr on Unsplash


ಈಗ ಇಷ್ಟೊಂದು ಇತಿಹಾಸ ಇರುವ  ಮಾವಿನ ಹಣ್ಣಿನ ಬಗ್ಗೆ  ನಿಮ್ಮ ಅನಿಸಿಕೆ  ಏನೆಂದು  ಹಂಚಿಕೊಳ್ಳಿ
 











ಮಂಗಳವಾರ, ಜೂನ್ 8, 2021

ಮೂರನೇ ಅಲೆಗೆ ನೀವುಗಳು ಎಷ್ಟು ಸಿದ್ದರಾಗಿದೀರಾ ?


ಕೊರೋನಾ ಪ್ರಕರಣಗಳು ಕಡಿಮೆಯಾದ ತಕ್ಷಣ, ನಾವೆಲ್ಲರೂ ನಮಗಾದ  ನಷ್ಟ ಪ್ರಾಣಹಾನಿಗಳನ್ನ ಮರೆತು, ಬೇಕಾಬಿಟ್ಟಿ ಓಡಾಡುವುದು ಹಾಗೂ ಗುಂಪು ಗುಂಪಾಗಿ  ಸೇರುವುದು ಮಾಡಿದ್ರೆ, ಎರಡನೇ ಅಲೆಯ ವೈರಸ್ಗಿಂತ ವೇಗವಾಗಿ ಹಾಗೂ ಇನ್ನೂ ಹೆಚ್ಚು ಪ್ರಬಲವಾಗಿ ಮತೊಮ್ಮೆ ಕೊರೋನಾ ಹರಡುವುದು ಅಂತೂ ನಿಜ. 


3 ನೇ ಅಲೆಯು "ಅನಿವಾರ್ಯ" ಎಂದು ಸರ್ಕಾರದ ಉನ್ನತ ವೈಜ್ಞಾನಿಕ ಸಲಹೆಗಾರ ಡಾ. ಕೆ. ವಿಜಯ್ ರಾಗವಾನ್ ಕೂಡ ಈಗಾಗಲೇ ಹೇಳಿದ್ದಾರೆ. ಅವರ ಪ್ರಕಾರ 3 ನೇ ಅಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಹ ಅಪಾಯಕ್ಕೆ ಒಳಗಾಗಬಹುದು ಎಂದು ಹೇಳಿದ್ದರೆ. 


ಆದ್ದರಿಂದ ನಾವುಗಳೆಲ್ಲಾ  3 ನೇ ಅಲೆಗೆ ಮಾನಸಿಕವಾಗಿ ಸಿದ್ಧರಾಗಿರಬೇಕು. 

ಅಂದಾಜಿನ ಪ್ರಕಾರ ಈಗ ನಡೆಯುತ್ತಿರುವ ಎರಡನೇ ಅಲೆಯು, ಜುಲೈ ವೇಳೆಗೆ ಇಳಿಯಲಿದೆ ಮತ್ತು ಮೂರನೇ ಅಲೆಯು  ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಬಹುದು. 

ಹಾಗಾದ್ರೆ ಇದನ್ನ ಹೇಗೆ ಎದುರಿಸಬೇಕು ?. ಇಲ್ಲಿದೆ ನೋಡಿ ಒಂದಿಷ್ಟು ಮಾಹಿತಿಗಳು 

  • ವೈದ್ಯಕೀಯ ಕ್ಷೇತ್ರಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನ ಒದಗಿಸಿ , ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಓದು ಮುಗಿಸಿರುವ ಡಾಕ್ಟರ್ ಹಾಗು ನರ್ಸ್ ಗಳಿಗೆ  ಅವಕಾಶ ಕೊಡಬೇಕು , 
  • ಗ್ರಾಮ ಮಟ್ಟದಲ್ಲಿನ  ವೈದ್ಯಕೀಯ ಸೌಲಭ್ಯಗಳನ್ನ ಉತ್ತಮ ಮಟ್ಟದಲ್ಲಿ ಮಾಡಬೇಕು , ಅದರ  ಸಂಪೂರ್ಣ ಜವಾಬ್ದಾರಿಯು ಆ ಊರಿನ ಜಿಲ್ಲಾಧಿಕಾರಿಯ ಮೇಲೆ ಇರಬೇಕು . 


  • ಜುಲೈ ಅಂತ್ಯ ಅಥವಾ ಆಗಸ್ಟ್ ಆರಂಭದ ವೇಳೆಗೆ ಕನಿಷ್ಠ 80% ಜನಸಂಖ್ಯೆಗೆ 2 ಡೋಸ್ ವ್ಯಾಕ್ಸಿನೇಷನ್ ನೀಡುವುದು  ಸರ್ಕಾರದ  ಗುರಿಯಾಗಬೇಕು.  
  • ಈಗ ಮಂತ್ರಿ ಮಂಡಲದಲ್ಲಿ , ಕೋವಿಡ್ ನಿಯಂತ್ರಣಕ್ಕೆ ಬೇಕಾದ  ಹಾಗೆ ವಿಂಗಡಿಸಿರುವ  ಮಂತ್ರಿಮಂಡಲದ  ಕಾರ್ಯವು ಕೋವಿಡ್   ಸಂಪೂರ್ಣ ನಿಯಂತ್ರಣವಾಗುವರೆಗೂ ಮುಂದುವರೆಯಬೇಕು.  . 



  • ಮಕ್ಕಳಿಗೆ  ವ್ಯಾಕ್ಸಿನೇಷನ್ಗಾಗಿ  ಕ್ಲಿನಿಕಲ್ ಪ್ರಯೋಗಗಳು ಅತಿ ಬೇಗ ಶುರು ಆಗ್ಬೇಕು 
           



  •  ಕೋವಿಡ್ ಸಂಬಂಧಿತ ಕೆಲವು  ನಿರ್ಬಂಧಗಳು ಈಗಿರುವ ಹಾಗೆ  ಮುಂದುವರೆಯಬೇಕು. ಯಾರೇ  ವ್ಯಕ್ತಿ ಮಾಸ್ಕ ಹಾಕದೆ ಇದ್ದರೆ ಹಾಗು ಮೂಗಿನ ಕೆಳಗೆ ಮಾಸ್ಕ ಹಾಕಿದ್ರೆ ಅವ್ರಿಗೆ ಅರಿವು ಆಗೋ ಹಾಗೆ ದಂಡವನ್ನ ವಿಧಿಸಬೇಕು.  





  • ಮಾಸ್ಕ ಜೊತೆಗೆ ಹ್ಯಾಂಡ್ ಗ್ಲೋವ್ಸ್ ನ್ನ ಹಾಕಲು ಆದೇಶಿಸಬೇಕು ಹಾಗೂ  ಖಡ್ಡಾಯ ಮಾಡಬೇಕು . 

             


  • ಕೋವಿಡ್ ಫೋರ್ಸ್ ತಂಡದ ರಚನೆಯಾಗಬೇಕು .ಹೇಗೆ ಟ್ರಾಫಿಕ್ ಫೋಲಿಸ್  ಇರುತ್ತಾರೋ ಹಾಗೆ ಕೋವಿಡ್ ಫೋರ್ಸ್ ರಚನೆಯಾಗಿ,  ಯಾರೇ  ಕೋವಿಡ್ ಸಂಬಂಧಿತ ನಿರ್ಬಂಧಗಳನ್ನ  ಮುರಿದರೆ ಮತ್ತು ಗುಂಪು ಗುಂಪಾಗಿ  ಸೇರಿದ್ರೆ ಅವ್ರಿಗೆ ತಕ್ಕ ಶಿಕ್ಷೆಯಾಗವ ಹಾಗೆ ಕಾನೂನುಗಳನ್ನ ಜಾರಿಗಳಿಸಬೇಕು ಹಾಗೂ  ಇವರುಗಳು ಕೋವಿಡ್ ನಿಯಂತ್ರಣದ ರೂವಾರಿಗಳು  ಆಗ್ಬೇಕು 

       


  • ಹೊರದೇಶದಿಂದ ಬರುವರಿಗೆ 15 ದಿನಗಳವರೆಗೂ  ಕ್ವಾರಂಟೈನ್ ಮಾಡಲೇಬೇಕು.  



  • ಕಂಪೆನಿಗಳಲ್ಲಿ ಅಗತ್ಯವಿರುವರು ಮಾತ್ರ ಪ್ರತಿ ದಿನ ಹೋಗುವ ವ್ಯವಸ್ಥೆ ಶುರುವಾಗಬೇಕು . ಹೆಚ್ಚಿನ ಜನರು ಮನೆಯಿಂದಾನೆ ಕೆಲಸ ಮಾಡೋ ತರ ಆಗ್ಬೇಕು , ಸರ್ಕಾರವೇ ಅಧಿಕಾರಿಗಳನ್ನ  ನಿಯಮಿಸಿ ಅಗತ್ಯ ಇರುವರಿಗೆ ಮಾತ್ರ ಅವ್ರ ಹುದ್ದೆಗೆ ತಕ್ಕ ಹಾಗೆ ಪ್ರತಿ ದಿನ ಹೋಗಲು ಪಾಸ್ ಗಳನ್ನ ತಿಂಗಳಿಗೊಮ್ಮೆ ಕೊಡಬೇಕು.   

 

  • ಹತ್ತಕ್ಕಿಂತ  ಹೆಚ್ಚು  ಜನ ಸೇರುವ ಎಲ್ಲಾ ರೀತಿಯ ಸೋಶಿಯಲ್ ಆಕ್ಟಿವಿಟಿಗಳನ್ನ ನಿಷೇದ್ದ ಮಾಡಲೇಬೇಕು , ನಿಯಮ ಮೀರಿದ್ದರೆ ತಕ್ಕ ಶಿಕ್ಷೆ ಹಾಗು ದಂಡವನ್ನು ಹಾಕಬೇಕು .  



  • ಜನರು ತಮ್ಮ ಮನೆಯಲ್ಲಿ ಇಮ್ಮ್ಯೂನಿಟಿ ಹೆಚ್ಚಿಸುವ ಆಹಾರಗಳನ್ನ  ಸೇವಿಸುವುದು  ಹಾಗೂ  ಯೋಗ ಮಾಡುವುದನ್ನ ಹವ್ಯಾಸವಾಗಿ ಬೆಳೆಸಿಕೊಳ್ಳಬೇಕು. 




ಸರ್ಕಾರ  ಕೊರೋನಾ ವಿರುದ್ಧ ಹೋರಾಡಲು  ಹೊರಡಿಸುವ  ಆದೇಶಗಳನ್ನ ಜನಗಳು ನೆಗ್ಲೆಕ್ಟ್ ಮಾಡದೇ ಪಾಲಿಸಬೇಕು . 

ನೆನಪಿರಲಿ ಕೋವಿಡ್ ನ ಜೊತೆ ಹೋರಾಟ ಬರಿ ಸರ್ಕಾರದ ಹೊಣೆಯಲ್ಲ , ನಮ್ಮ ನಿಮ್ಮಲ್ಲೇರ ಹಕ್ಕು ಕೂಡ ಜನ ಹಾಗು ಸರ್ಕಾರ ಜೊತೆಯಾದ್ರೆ  ಮಾತ್ರ ಕೋವಿಡ್ ನ್ನ ತಡೆಯಬಹುದು,

ನಮ್ಮ ನೆಗ್ಲೆಕ್ಟ್ ಯಿಂದ ಎರಡನೇ ಅಲೆಯಲ್ಲಿ ಸಾಕಷ್ಟು ನಷ್ಟಗಳನ್ನ ಅನುಭವಿಸಿದಿವಿ . ಈಗಲಾದ್ರೂ ನಾವುಗಳು ಬುದ್ದಿ ಕಲಿಯೋಣ ಹಾಗೂ  ನಮ್ಮ  ಸುತ್ತಮುತ್ತಲಿರುವರನ್ನ ಬುದ್ದಿವಂತರಾಗಿಸಿ  ಕೋವಿಡ್ ವಿರುದ್ಧ ಹೋರಾಡಿ ನಮ್ಮವರನ್ನ ಉಳಿಸಿಕೊಳ್ಳೋಣ.   

ಇದರ ಬಗ್ಗೆ ನಿಮ್ಮ ಅನಿಸಿಕೆ ಹಾಗು ವಿಚಾರವನ್ನು ಹಂಚಿಕೊಳ್ಳಿ